ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಸ್ತು ಪ್ರದರ್ಶನದಲ್ಲಿ ಪ್ರಥಮ ಸ್ಥಾನ:
ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇದರ ಅಮೃತ ಮಹೋತ್ಸವದ ಪ್ರಯುಕ್ತ 2025 ನೇ ಇಸವಿಯ ಡಿಸೆಂಬರ್ ತಿಂಗಳ 27 ಹಾಗೂ 28ರಂದು ನಡೆದಂತಹ ಜಿಲ್ಲಾ ಮಟ್ಟದ ಶೈಕ್ಷಣಿಕ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡ ಭಾಗವಹಿಸಿ ₹11,111-/-ನಗದು ಬಹುಮಾನದೊಂದಿಗೆ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿರುತ್ತಾರೆ. ಪ್ರೌಢಶಾಲಾ ವಿಭಾಗದ 12 ವಿದ್ಯಾರ್ಥಿಗಳ ತಂಡ “ಫ್ರಮ್ ಚಿಸಲ್ ಟು ಚಿಪ್” (ಪುರಾತನ ಶಿಲಾಪರಿಕರದಿಂದ ಆಧುನಿಕ ನ್ಯಾನೋ ಚಿಪ್ ವರೆಗೆ) ಎಂಬ ಪರಿಕಲ್ಪನೆಯನ್ನು ವಿಜ್ಞಾನ ವಸ್ತು ಪ್ರದರ್ಶನದ ವಿಷಯವಾಗಿರಿಸಿಕೊಂಡು ಗುಂಪು ಸ್ಪರ್ಧೆಯಲ್ಲಿ ಸ್ಪರ್ಧಿಸಿರುತ್ತಾರೆ.
10ನೇ ತರಗತಿಯ ಸಾನ್ವಿ ಎಸ್ ಪ್ರಭು( ಶ್ರೀ ಸಂತೋಷ್ ಪ್ರಭು ಮತ್ತು ಶ್ರೀಮತಿ ಸವಿತಾ ಕೆ ದಂಪತಿ ಪುತ್ರಿ) 10 ನೇ ತರಗತಿಯ ಸುಪ್ರಜಾ ಎಸ್ ರಾವ್
(ಡಾ| ಪ್ರಶಾಂತ್ ರಾವ್ ಮತ್ತು ಶ್ರೀಮತಿ ಸುಮನ ಕೆ ದಂಪತಿ ಪುತ್ರಿ) 10ನೇ ತರಗತಿಯ ನಿಲಿಶ್ಕ ಕೆ( ಶ್ರೀ ದಿನೇಶ್ ಮತ್ತು ಶ್ರೀಮತಿ ಸ್ಮಿತಾ ದಂಪತಿ ಪುತ್ರಿ) 9ನೇ ತರಗತಿಯ ಕ್ಷಮೆತ್ ಜೈನ್( ಶ್ರೀ ಮನೀಶ್ ಕುಮಾರ್ ಮತ್ತು ಶ್ರೀಮತಿ ಶೃತಿ ಕುಮಾರಿ ವೈ ದಂಪತಿ ಪುತ್ರ), 9ನೇ ತರಗತಿಯ ಚಂದನ್ ಎಂ
( ಶ್ರೀ ಶಾಂತರಾಮ ನಾಯಕ್ ಎಂ ಮತ್ತು ಶ್ರೀಮತಿ ಕಾಂತಿಮಣಿ ದಂಪತಿ ಪುತ್ರ) 9ನೇ ತರಗತಿಯ ನಮಿಶ್ ಪೂಜಾರಿ
(ಶ್ರೀ ಸತೀಶ್ ಪೂಜಾರಿ ಮತ್ತು ಶ್ರೀಮತಿ ಜಯಶ್ರೀ ದಂಪತಿ ಪುತ್ರ )9ನೇ ತರಗತಿಯ ಪೂರ್ವಿ ಬಿ ಸಿ (ಚಂದ್ರಶೇಖರ್ ಬಿ ಸುಳ್ಯಪದವು ಮತ್ತು ಶ್ರೀಮತಿ ನಮಿತಾ ಅಂಚನ್ ದಂಪತಿ ಪುತ್ರಿ), ದ್ವಿತಿ ಟಿ ಆಚಾರ್ಯ (ಶ್ರೀ ತಾರಾನಾಥ ಎನ್ ಆಚಾರ್ಯ ಮತ್ತು ಶ್ರೀಮತಿ ರಜಿನಿ ಆಚಾರ್ಯ ದಂಪತಿ ಪುತ್ರಿ) ಕ್ಷಮಾ ಜೆ ರೈ( ಶ್ರೀ ಜಗದೀಶ ರೈ ಪಿ ಮತ್ತು ಶ್ರೀಮತಿ ಶೋಭಾ ಜೆ ರೈ ದಂಪತಿ ಪುತ್ರಿ) ಎಂಟನೇ ತರಗತಿಯ ಅವಿ ವಿ ರೈ( ಶ್ರೀ ವಿನೋದ್ ಕುಮಾರ್ ರೈ ಶ್ರೀಮತಿ ಅಕ್ಷತಾ ವಿ ರೈ ದಂಪತಿ ಪುತ್ರ) ಎಂಟನೇ ತರಗತಿಯ ಶರಧಿ ಚನಿಲ( ಶ್ರೀ ಘುರಾಮಚಂದ್ರ ಚನಿಲ ಮತ್ತು ಶ್ರೀಮತಿ ಸಂಧ್ಯಾ ಪಿ ಎಂ ದಂಪತಿ ಪುತ್ರಿ) ಎಂಟನೇ ತರಗತಿಯ ಪ್ರತೀಕ್ಷ ದೀಪ್ತಿ ಯು( ಶ್ರೀ ಉಮೇಶ್ ಚಂದ್ರ ಯು ಮತ್ತು ಶ್ರೀಮತಿ ಸೌಮ್ಯಲಕ್ಷ್ಮಿ ಆರ್ ದಂಪತಿ ಪುತ್ರಿ) ಇವರು ವಿವಿಧ ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ ಫಲಕ ಸಹಿತ ನಗದು ಬಹುಮಾನದೊಂದಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.