ವಿದ್ಯಾ ಭಾರತಿ ರಾಷ್ಟ್ರಮಟ್ಟದ ಈಜು ಸ್ಪರ್ಧೆ.
ವಿದ್ಯಾಭಾರತಿ ರಾಷ್ಟ್ರಮಟ್ಟದ ಈಜು ಸ್ಪರ್ಧೆಯು ದಿನಾಂಕ 14 ನವೆಂಬರ್ರಿಂದ 17 ನವೆಂಬರ್ ವರೆಗೆ ಬೆಂಗಳೂರಿನ ಲ್ಲಿ ನಡೆದಿದ್ದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಎಸ್ ಜಿ ಎಫ್ ಐ ಗೆ ಆಯ್ಕೆಯಾಗಿರುತ್ತಾರೆ. ನಮನ್ ನಾಯಕ್ ಬಿ (ಸಂದೀಪ್ ನಾಯಕ್ ಬಿ ಮತ್ತು ನಮಿತಾ ದಂಪತಿಯವರ ಪುತ್ರ) 50 ಮೀಟರ್ ಬಟರ್ ಫ್ಲೈ ನಲ್ಲಿ ಚಿನ್ನದ ಪದಕವನ್ನು ಹಾಗೂ 100 ಮೀಟರ್ ಬ್ಯಾಕ್ ಸ್ಟ್ರೋಕ್ ನಲ್ಲಿ ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ. ವಿ .ವೈಷ್ಣವ್ (ವೀರಪ್ಪ ಮತ್ತು ಶ್ವೇತ ಯಚ್ ಸಿ ದಂಪತಿಗಳ ಪುತ್ರ) 200 ಮೀಟರ್ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ . ಈ ವಿದ್ಯಾರ್ಥಿಗಳು ನವಂಬರ್ 30 ರಿಂದ ಡಿಸೆಂಬರ್ 5 ರವರೆಗೆ ದಿಲ್ಲಿ ಯಲ್ಲಿ ನಡೆಯಲಿರುವ ಯಸ್.ಜಿ ಎಫ್ ಐ. ಈಜು ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ತಿಳಿಸಿರುತ್ತಾರೆ