ರಾಜ್ಯಮಟ್ಟದ “ವಿವೇಕ-ವಿದ್ಯಾರ್ಥಿ” ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಸ್ಥಾನಗಳು
ರಾಮಕೃಷ್ಣ ವಿವೇಕಾನಂದ ಭಾವ ಪ್ರಚಾರ ಪರಿಷತ್, ಕರ್ನಾಟಕ “ವಿವೇಕ- ವಿದ್ಯಾರ್ಥಿ” ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯನ್ನು 9 ನವೆಂಬರ್ ,2025 ರಂದು ರಾಮಕೃಷ್ಣ ವಿವೇಕಾನಂದ ಆಶ್ರಮ ರಾಮಕೃಷ್ಣನಗರ ಕುಣಿಗಲ್ ರಸ್ತೆ ತುಮಕೂರು ಇದರ ವತಿಯಿಂದ ನಡೆಸಲಾಗಿತ್ತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದು ಉತ್ತಮ ಅಂಕಗಳನ್ನು ಪಡೆದು ರಾಜ್ಯಮಟ್ಟದಲ್ಲಿ, ಹಾಗು ಜಿಲ್ಲಾ ಮಟ್ಟದಲ್ಲಿ ಸ್ಥಾನಗಳನ್ನು ಗಳಿಸಿರುತ್ತಾರೆ. 9ನೇ ತರಗತಿಯ ಸಾನ್ವಿ.ಎಸ್ ಇವರು ರಾಜ್ಯಮಟ್ಟದಲ್ಲಿ ಎಂಟನೇ ಸ್ಥಾನವನ್ನು ಪಡೆದಿದ್ದು 2026 ಜನವರಿಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ನಡೆಯುವ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಹ ಶಿಕ್ಷಕಿ ಸೌಮ್ಯಶ್ರೀ ಹಾಗೂ ಸಂತೋಷ ಕುಮಾರ್ ದಂಪತಿಗಳ ಪುತ್ರಿಯಾಗಿರುತ್ತಾರೆ.
ಜಿಲ್ಲಾಮಟ್ಟದಲ್ಲಿ ಹತ್ತನೇ ತರಗತಿಯ ಅಪೇಕ್ಷ. ಎನ್ ರವರು ಒಂದನೇ ಸ್ಥಾನವನ್ನು ಪಡೆದಿದ್ದು ವೆಂಕಟರಮಣ ಕಾರಂತ್ ಹಾಗೂ ಸಂಧ್ಯ ದಂಪತಿಗಳ ಪುತ್ರಿ ,ಎಂಟನೇ ತರಗತಿಯ ಅನಘ ಪಿ ಇವರು ಎರಡನೇ ಸ್ಥಾನವನ್ನು ಗಳಿಸಿರುತ್ತಾರೆ. ಇವರು ಶ್ರೀಹರಿಪಿ ಹಾಗೂ ಅಕ್ಷತ ಕುಮಾರಿ ಇವರ ಪುತ್ರಿಯಾಗಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.