ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಸಭೆಯು ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ಶಿವಪ್ರಕಾಶ್.ಎಂ, ಅವರ ಅಧ್ಯಕ್ಷತೆಯಲ್ಲಿ ದಿನಾಂಕ 19-08-2025ನೇ ಮಂಗಳವಾರ ನಡೆಯಿತು.
ಈ ಸಭೆಯಲ್ಲಿ 2025-26 ಸಾಲಿಗೆ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆಯು ಶಾಲಾ ಸಂಚಾಲಕರಾದ ಶ್ರೀ ರವಿನಾರಾಯಣ.ಎಂ ಹಾಗೂ ನಿಕಟಪೂರ್ವ ಉಪಾಧ್ಯಕ್ಷರಾದ ಶ್ರೀ ಸುರೇಶ್ ಮತ್ತು ಕಾರ್ಯಕಾರಿ ಸಮಿತಿಯ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನಡೆಯಿತು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀ ಭಾಸ್ಕರ್ ಬಲ್ಯಾಯ, ಉಪಾಧ್ಯಕ್ಷರುಗಳಾಗಿ ಶ್ರೀಮತಿ ಉಮಾಶ್ರೀ.ಡಿ, ಶ್ರೀ ಕಿರಣ್ ಕುಮಾರ್ ಮುಂಗ್ಲಿಮನೆ, ಶ್ರೀ ಮಹೇಶ್, ಕೆ ಮತ್ತು ಶ್ರೀಮತಿ ಸಹನಾ.ಪಿ.ಎಸ್ ಆಯ್ಕೆಯಾದರು. ಈ ನೂತನ ಅಧ್ಯಕ್ಷರಿಗೆ ಹಾಗೂ ಅವರ ತಂಡಕ್ಕೆ ಜವಾಬ್ದಾರಿಯನ್ನು ಹಸ್ತಾಂತರಿಸಿದ ಶಾಲಾ ಅಧ್ಯಕ್ಷರು ಮತ್ತು ಸಂಚಾಲಕರು ಯಶಸ್ಸನ್ನು ಹಾರೈಸಿದರು.
ನೂತನ ಅಧ್ಯಕ್ಷರು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಮಾತೃಸಂಸ್ಥೆಯಾದ ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಚಾರಧಾರೆಯಂತೆ ಶ್ರಮಿಸುವುದಾಗಿ ತಿಳಿಸಿ, ಸಂಬಂಧಿತ ಎಲ್ಲರ ಸಹಕಾರವನ್ನು ಯಾಚಿಸಿದರು. ಈ ಸಂದರ್ಭದಲ್ಲಿ SCIENCE OLYMPIAD FOUNDATION- ಇದರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕು.ಚಿನ್ಮಯಿ.ಎಲ್ ಇವರನ್ನು ರೂ.5000/- ನಗದು ಮತ್ತು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಶ್ರೀ ಭಾಸ್ಕರ್ ಬಲ್ಯಾಯ
ಅಧ್ಯಕ್ಷರು
ಶ್ರೀಮತಿ ಉಮಾಶ್ರೀ.ಡಿ
ಉಪಾಧ್ಯಕ್ಷರು
ಶ್ರೀ ಕಿರಣ್ ಕುಮಾರ್ ಮುಂಗ್ಲಿಮನೆ
ಉಪಾಧ್ಯಕ್ಷರು
ಶ್ರೀ ಮಹೇಶ್.ಕೆ
ಉಪಾಧ್ಯಕ್ಷರು