ಪ್ರತಿಭಾ ಕಾರಂಜಿ 2025: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಪ್ರಶಸ್ತಿ
ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಇದರ ವ್ಯಾಪ್ತಿಗೊಳಪಟ್ಟ ಪುತ್ತೂರು ಮತ್ತು ಕಡಬ ತಾಲೂಕುಗಳ ಪ್ರೌಢ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಕಲನ-2025 ವು ಹಾರಾಡಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಡಿಸೆಂಬರ್ 15ರಂದು ನಡೆಯಿತು.
ಇದರಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿ ಅನಘ ಸರಸ್ವತಿ( ಜಯರಾಮ್ ಭಟ್ ಮತ್ತು ವಿಶಾಲ ದಂಪತಿಗಳ ಪುತ್ರಿ) ಹಿರಿಯ ಪ್ರಾಥಮಿಕ ವಿಭಾಗದ ಹಿಂದಿ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು, ಡಿಸೆಂಬರ್ 22ರಂದು ಮೂಡುಬಿದರೆಯ ಆಲಂಗಾರು ಸೈಂಟ ಥೋಮಸ್ ಶಾಲೆಯಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಏಳನೇ ತರಗತಿಯ ಪೂರ್ವಿ ಭಟ್(ರಾಜ ನಾರಾಯಣ ಮತ್ತು ಚೈತ್ರ ಕೆ.ಎಸ್ ದಂಪತಿಗಳ ಪುತ್ರಿ,) ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಕಿರಿಯರ ಪ್ರಾಥಮಿಕ ವಿಭಾಗದಲ್ಲಿ ನಾಲ್ಕನೆಯ ತರಗತಿಯ ಶೌರಿ ಹಿಳ್ಳೆಮನೆ (ಶಿವಕುಮಾರ್ ಹಿಳ್ಳೆಮನೆ ಮತ್ತು ಸಹನಾ ಶಿವಕುಮಾರ್ ದಂಪತಿಗಳ ಪುತ್ರಿ)ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಭಕ್ತಿಗೀತೆ ಸ್ಪರ್ಧೆಯಲ್ಲಿ ನಾಲ್ಕನೆಯ ತರಗತಿಯ ಜಾಹ್ನವಿ.ಕೆ(ಕೃಷ್ಣ ಕುಮಾರ್. ಕೆ ಮತ್ತು ಮಧುರಾ.ಕೆ ದಂಪತಿಗಳ ಪುತ್ರಿ)ತೃತೀಯ ಸ್ಥಾನವನ್ನು ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.