ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಕ್ಷೇತ್ರ ಮಟ್ಟಕ್ಕೆ ಆಯ್ಕೆ.
ವಿದ್ಯಾಭಾರತಿ ಕರ್ನಾಟಕ ಇವರು ಆಯೋಜಿಸಿರುವ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟವು ಜುಲೈ 29 ರಿಂದ 31ನೇ ತಾರೀಕು ತನಕ ಕಲಬುರ್ಗಿಯ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣ ದಲ್ಲಿ ನಡೆಯಿತು. ಈ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.
14 ರ ವಯೋಮಾನದ ಬಾಲಕರ ವಿಭಾಗದಲ್ಲಿ ರಾಹುಲ್ . ಕೆ (ಹರೀಶ್ ಮತ್ತು ಭವಾನಿ ದಂಪತಿಗಳ ಪುತ್ರ) 400 ಮೀಟರ್ ಪ್ರಥಮ, 200 ಮೀಟರ್ ದ್ವಿತೀಯ. ಸರ್ವಿನ್ ಸಿ (ಚಿತ್ರನಾಯಗಮo ಆರ್ ಮತ್ತು ಪ್ರವೀಣ ಕುಮಾರಿ ದಂಪತಿಗಳ ಪುತ್ರ) 100 ಮೀಟರ್ ದ್ವಿತೀಯ, 80 ಮೀಟರ್ ಹಡಲ್ಸ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಮಾನ್ವಿ ಪಿ ರೈ(ಪ್ರವೀಣ್ ಎಂ ಮತ್ತು ಪೂಜಾಲತಾ ದಂಪತಿಗಳ ಪುತ್ರಿ) ಗುಂಡು ಎಸೆತ ದ್ವಿತೀಯ. ಹಂಸಿಕಾ ಎನ್ (ವಸಂತಗೌಡ ಮತ್ತು ಸುಜಾತ ಎನ್ ದಂಪತಿಗಳ ಪುತ್ರಿ) ಉದ್ದ ಜಿಗಿತ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
17ರ ವಯೋಮಾನದ ಬಾಲಕರ ವಿಭಾಗದಲ್ಲಿ ವೈಭವ್ ಕಾಮತ್ (ವಿದ್ಯಾದರ ಕಾಮತ್ ಮತ್ತು ಮುಕ್ತ ಕಾಮತ್ ದಂಪತಿಗಳ ಪುತ್ರ) ತ್ರಿವಿಧ ಜಿಗಿತ ಪ್ರಥಮ, 400 ಮೀಟರ್ ತೃತೀಯ. ಕೃತಿಕ್ ಆರ್ (ರಾಜೇಶ್ ಮತ್ತು ರೇಖಾ ದಂಪತಿಗಳ ಪುತ್ರ) ತ್ರಿವಿಧ ಜಿಗಿತ ದ್ವಿತೀಯ, 110 ಮೀಟರ್ ಹಡಲ್ಸ್ ದ್ವಿತೀಯ. ಪ್ರೀತಮ್ (ಕರುಣಾಕರ ಮತ್ತು ಜಯಂತಿ ದಂಪತಿಗಳ ಪುತ್ರ) 110 ಮೀಟರ್ ಹಡಲ್ಸ್ ಪ್ರಥಮ. ಅನ್ವಿತ್ ರೈ (ಭಾಸ್ಕರ್ ಮತ್ತು ಶುಭ ರೈ ದಂಪತಿಗಳ ಪುತ್ರ) ಉದ್ದ ಜಿಗಿತ ತೃತೀಯ ಸ್ಥಾನ ಪಡೆದಿರುತ್ತಾರೆ. 17ರ ವಯೋಮಾನದ ಬಾಲಕರ ಪ್ರಥಮ ತಂಡ ಪ್ರಶಸ್ತಿಯನ್ನು ಪಡೆದಿರುತ್ತಾರೆ.
17ರ ವಯೋಮಾನದ ಬಾಲಕಿಯ ವಿಭಾಗದಲ್ಲಿ ಆತ್ಮೀ ಕೆ ಎಲ್ (ಲಕ್ಷ್ಮಣಗೌಡ ಬೆಳ್ಳಿಪ್ಪಾಡಿ ಮತ್ತು ಹೇಮಲತಾ ದಂಪತಿಗಳ ಪುತ್ರಿ) 100 ಮೀಟರ್ ಪ್ರಥಮ, 200 ಮೀಟರ್ ಪ್ರಥಮ, 400 ಮೀಟರ್ ಪ್ರಥಮ ಪಡೆದು ವೈಯಕ್ತಿಕ ಚಾಂಪಿಯನ್ ಆಗಿರುತ್ತಾಳೆ. ನಿಧಿಶ್ರೀ ಕೆ (ದೇವಣ್ಣ ಗೌಡ ಮತ್ತು ಹೇಮಲತಾ ದಂಪತಿಗಳ ಪುತ್ರಿ)100 ಮೀಟರ್ ಹಡಲ್ಸ್ ಪ್ರಥಮ, 100 ಮೀಟರ್ ದ್ವಿತೀಯ. ವಂಶಿತ ಎನ್ (ವಸಂತಗೌಡ ಮತ್ತು ಸುಜಾತ ದಂಪತಿಗಳ ಪುತ್ರಿ) ತ್ರಿವಿಧ ಜಿಗಿತ ಪ್ರಥಮ, ಉದ್ದ ಜಿಗಿತ ದ್ವಿತೀಯ, 400 ಮೀಟರ್ ಹಡಲ್ಸ್ ಪ್ರಥಮ. ನಿಷ್ಮ ಕೆ (ಪ್ರದೀಪ್ ಕೆ ಮತ್ತು ಪ್ರಶಾಂತಿ ದಂಪತಿಗಳ ಪುತ್ರಿ) ಚಕ್ರ ಎಸೆತ ದ್ವಿತೀಯ. ಸೃಷ್ಟಿ (ಉಮೇಶ್ ಮತ್ತು ಶೈಲ ದಂಪತಿಗಳ ಪುತ್ರಿ) 1500 ಮೀಟರ್ ತೃತೀಯ. 17ರ ವಯೋಮಾನದ ಬಾಲಕಿಯರ ತಂಡ ಪ್ರಶಸ್ತಿಯನ್ನು ಪಡೆದಿರುತ್ತಾರೆ.
ಸಪ್ಟೆಂಬರ್ 3 ,4 ಮತ್ತು 5ನೇ ತಾರೀಕುಗಳಂದು ಹೈದರಾಬಾದ್ ನಲ್ಲಿ ನಡೆಯುವ ಕ್ಷೇತ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.