ಪುತ್ತೂರು ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಚೆಸ್ ಪಂದ್ಯಾಟ
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಎವಿಜಿ ಆಂಗ್ಲ ಮಾಧ್ಯಮ ಶಾಲೆ ಬನ್ನೂರು, ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಚೆಸ್ ಪಂದ್ಯಾಟವು ದಿನಾಂಕ 27.07.2026ನೇ ಸೋಮವಾರದಂದು ನಡೆದಿದ್ದು ಇದರಲ್ಲಿ ವಿವೇಕಾನಂದ ಅಂಗ್ಲ ಮಾಧ್ಯಮ ಶಾಲೆ, ಪುತ್ತೂರು ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನಗಳನ್ನು ಪಡೆದಿರುತ್ತಾರೆ.
17ನೇ ವಯೋಮಾನದ ಬಾಲಕರ ವಿಭಾಗದಲ್ಲಿ ಹರ್ಷಿನ್. ವೈ 10ನೇ ತರಗತಿ ( ದೇವಪ್ಪ ಗೌಡ ಹಾಗೂ ಕುಸುಮ ಬಿ ದಂಪತಿಯ ಪುತ್ರ )
ಅಜಯ್ ಪಿ.ಕೆ 9ನೇ ತರಗತಿ ( ಕೃಷ್ಣಪ್ರಸಾದ್ ಪಿ ಜಿ ಹಾಗೂ ಶಶಿಕಲಾ. ಡಿ ದಂಪತಿಯ ಪುತ್ರ )
ಅಮನ್ ಜಲೀಲ್ ಶೇಖ್ 10ನೇ ತರಗತಿ ( ಶೆಖ್ ಜಲೀಲ್ ಹಾಗೂ ಶಬೀನ ಬಾನು ದಂಪತಿಯ ಪುತ್ರ ) ಇವರುಗಳು ತಾಲೂಕು ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿರುತ್ತಾರೆ.
14ನೇ ವಯೋಮಾನದ ಬಾಲಕರ ವಿಭಾಗದಲ್ಲಿ ಮನ್ವಿತ್ ರೈ 7ನೇ ತರಗತಿ ( ಕೆ. ಮೋಹನ್ ರೈ ಹಾಗೂ ಮೈನಾ ದಂಪತಿಯ ಪುತ್ರ )
ಅಭಿಷ್ಟ ಶಂಕರ ಶರ್ಮ 8ನೇ ತರಗತಿ ( ಸತ್ಯಶಂಕರ ಭಟ್ ಹಾಗೂ ಹೇಮಾದೀಪ ದಂಪತಿಯ ಪುತ್ರ )
ವಸುಧಾಮ 8ನೇ ತರಗತಿ( ಶ್ರೀಹರಿಕೃಷ್ಣ ಭಟ್ ಬಿ. ಅನ್ನಪೂರ್ಣೇಶ್ವರಿ ಎಂ ದಂಪತಿಯ ಪುತ್ರ)
ಹಾಗೂ 14ನೇ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಆರುಷಿ ರೈ 6ನೇ ತರಗತಿ (ನವೀನ್ ಪ್ರಸಾದ್. ರೈ ಹಾಗು ಭವ್ಯ. ಏನ್ ದಂಪತಿಯ ಪುತ್ರಿ )
ಧನ್ವಿ ಪಿ ಕೆ 7ನೇ ತರಗತಿ lಕೆ ಪುರುಷೋತ್ತಮ ಹಾಗೂ ಪುಷ್ಪಲತಾ. ಕೆ ದಂಪತಿಯ ಪುತ್ರಿ)
ಹೃಶಿಕ. ಜೆ 7ನೇ ತರಗತಿ (ಸಿ ಎಚ್ ಜಯಾನಂದ ಹಾಗೂ ಯಶ್ವಿನಿ ದಂಪತಿಯ ಪುತ್ರಿ )
ಕೃತಿಕ ಎಂ 8ನೇ ತರಗತಿ (ರಮೇಶ ಎಂ ಹಾಗೂ ರಾಜೇಶ್ವರಿ ಎಚ್ ದಂಪತಿಯ ಪುತ್ರಿ )
ಬಹುಮಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ ಎಂದು ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ. ತಾಲೂಕು ಮಟ್ಟದ ಸ್ಪರ್ಧೆಗಳು ದಿನಾಂಕ 03-08-2026 ರ ಸೋಮವಾರ ಸರಕಾರಿ ಪ್ರೌಢಶಾಲೆ, ಕಬಕದಲ್ಲಿ ನಡೆಯಲಿರುವುದು.